ದಾವಣಗೆರೆ, ಡಿಸೆಂಬರ್ ೧೪, ೨೦೨೫: ನಕಲಿ ಬಂಗಾರವನ್ನು ನಿಜವಾದದ್ದೆಂದು ಸೋಗು ಹಾಕಿ ಲಕ್ಷಾಂತರ ರೂಪಾಯಿ ಮೋಸಮಾಡಿದ ಆರೋಪದ ಮೇಲೆ ಇಬ್ಬರನ್ನು ಹೊನ್ನಾಳಿ ಪೊಲೀಸರು ಬಂಧನೆ ಮಾಡಿದ್ದಾರೆ. ಆರೋಪಿಗಳಿಂದ ರೂ. ೫ ಲಕ್ಷ ೯೦ ಸಾವಿರ ನಗದು, ಒಂದು ಮೊಬೈಲ್ ಫೋನ್ ಮತ್ತು ಅಪರಾಧದಲ್ಲಿ ಬಳಸಿದ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ:
ಮಂಡ್ಯ ಜಿಲ್ಲೆಮಳವಳ್ಳಿ ತಾಲ್ಲೂಕಿನ ಕುಂದೂರು ನಿವಾಸಿ ವೆಂಕಟೇಶಪ್ಪ (೩೫) ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಅವರ ದೂರಿನ ಪ್ರಕಾರ, ‘ಮಂಜುನಾಥ’ ಎಂಬ ವ್ಯಕ್ತಿಯೊಬ್ಬರು ತಮಗೆ ಫೋನ್ ಮಾಡಿ, ತಮ್ಮ ಅಜ್ಜನ ಮನೆ ತಗೆಯುವಾಗ ೪ ಕಿಲೋ ಬಂಗಾರ ಸಿಕ್ಕಿದೆ, ಅದರಲ್ಲಿ ಒಂದು ಕಾಲು ಕಿಲೋ ಬಂಗಾರವನ್ನು ಮಾರುಕಟ್ಟೆ ಬೆಲೆಗಿಂತ ಅರ್ಧದಾರೆ ಬೆಲೆಗೆ ನೀಡುತ್ತೇನೆ ಎಂದು ಹೇಳಿದ್ದರು. ನಂತರ ಮೊದಲು ಒಂದು ಬಿಲ್ಲೆಯನ್ನು ಪರೀಕ್ಷಿಸಿಕೊಳ್ಳಲು ಕೊಡುವುದಾಗಿ ಹೇಳಿ, ರೂ. ೬ ಲಕ್ಷ ಮತ್ತು ಮೊಬೈಲ್ ಫೋನ್ ಪಡೆದು, ನಕಲಿ ಬಂಗಾರದ ಬಿಲ್ಲೆಗಳು ತುಂಬಿದ ಗಂಟು ಒಪ್ಪಿಸಿ ಪಲಾಯನ ಮಾಡಿದ್ದರು.
ಪೊಲೀಸರ ಕಾರ್ಯಾಚರಣೆ:
ಈ ದೂರನ್ನುತೀವ್ರತೆರದಲ್ಲಿ ತೆಗೆದುಕೊಂಡ ಹೊನ್ನಾಳಿ ಪೊಲೀಸರು, ಜಿಲ್ಲಾ ಪೊಲೀಸ್ ಮುಖ್ಯಸ್ಥ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದರು. ತನಿಖೆ ನಡೆಸಿದ ಪೊಲೀಸರು ಡಿಸೆಂಬರ್ ೧೩ರಂದು ಇಬ್ಬರು ಆರೋಪಿಗಳನ್ನು ಗುರುತಿಸಿ ಬಂಧಿಸಿದರು.
ಬಂಧಿತ ಆರೋಪಿಗಳು:
೧.ಪರಶುರಾಮ (೪೩), ಹಾಡೋನಹಳ್ಳಿ, ಶಿವಮೊಗ್ಗ ತಾಲ್ಲೂಕು.
೨.ಮನೋಜ್ @ ಮನು (೨೮), ದಾನಿಹಳ್ಳಿ, ನ್ಯಾಮತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.
ಆರೋಪಿಗಳ ಹಿಂದೆಲೆ:
ಬಂಧಿತರಲ್ಲಿನ ಪ್ರಮುಖ ಆರೋಪಿಪರಶುರಾಮನ ಮೇಲೆ ಸಾಗರ ಪೊಲೀಸ್ ಠಾಣೆಯಲ್ಲಿ ಹಿಂದೆ ದಾಖಲಾದ ಮೋಸದ ಪ್ರಕರಣ ಇದ್ದು, ಅದರಲ್ಲಿ ಅವನು ಬಿಡುಗಡೆ ಹೊಂದಿದ್ದ. ಈಗ ಅದೇ ಪ್ರಕಾರದ ಅಪರಾಧದಲ್ಲಿ ಮತ್ತೆ ಸಿಕ್ಕಿಬಿದ್ದಿದ್ದಾನೆ.
ಪೊಲೀಸ್ ಅಧಿಕಾರಿಗಳ ಪ್ರತಿಕ್ರಿಯೆ:
ಜಿಲ್ಲಾಪೊಲೀಸ್ ಮುಖ್ಯಸ್ಥೆ ಉಮಾ ಪ್ರಶಾಂತ್ ಅವರು ಪ್ರಕರಣವನ್ನು ವೇಗವಾಗಿ ಬಗೆಹರಿಸಿದ ತನಿಖಾ ತಂಡದ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಮೋಸದ ಪ್ರಕರಣಗಳಲ್ಲಿ ಜಾಗರೂಕರಾಗಿರಲು ಹಾಗೂ ಅನುಮಾನಾಸ್ಪದ ಪ್ರಸ್ತಾಪಗಳಿಗೆ ಸುಲಭವಾಗಿ ನಂಬಿಕೆ ಇಡದಿರಲು ಸಾರ್ವಜನಿಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
